ಎಂಎಸಿಟಿ ನೀಡುವ ಕುರಿತ ಹೈಕೋರ್ಟ್ ನಿರ್ಧಾರದ ವಿರುದ್ಧ ಕೇರಳ ಬಾರ್ ಅಸೋಸಿಯೇಶನ್ ಪ್ರತಿಭಟನೆ
ಕೊಚ್ಚಿ, ನ. 30: ಹಕ್ಕುದಾರರಿಗೆ ಹಣವನ್ನು ಇಲೆಕ್ಟ್ರಾನಿಕ್ಸ್ ಮೋಡ್ ಮೂಲಕ ಪಾವತಿಸಲು ವಿಮಾ ಕಂಪೆನಿಗಳಿಗೆ ‘ಮೋಟರ್ ಆ್ಯಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ಸ್’ (ಎಂಎಸಿಟಿ) ನಿರ್ದೇಶಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಇತ್ತೀಚೆಗೆ ನೀಡಿದ ಮಾರ್ಗಸೂಚಿ ವಿರುದ್ಧ ಕೇರಳದ ಬಾರ್ ಅಸೋಸಿಯೇಶನ್ ಶನಿವಾರ ಪ್ರತಿಭಟನೆ ನಡೆಸಿದೆ. ಅಲ್ಲದೆ, ಇದು ವಕೀಲರ ಹಿತಾಸಕ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದೆ.
ಉಚ್ಚ ನ್ಯಾಯಾಲಯದ ನಿರ್ದೇಶನದ ವಿರುದ್ಧ ಪ್ರತಿಭಟನೆ ನಡೆಸಿದ ತಿರುವನಂತಪುರ ಬಾರ್ ಅಸೋಸಿಯೇಶನ್, ತನ್ನ ಸದಸ್ಯರಿಗೆ ಅದಾಲತ್ನಿಂದ ದೂರ ಇರುವಂತೆ ನಿರ್ದೇಶಿಸಿತು.
ಈ ವಿಷಯದ ಕುರಿತು ನಿರ್ವಹಣಾ ಸಮಿತಿ ಗಂಭೀರ ಚರ್ಚೆ ನಡೆಸಿತು ಹಾಗೂ ಹಿರಿಯ ಸದಸ್ಯರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಈ ಕ್ರಮ ನಮ್ಮ ಹಕ್ಕುಗಳ ಮೇಲೆ ದುಷ್ಪರಿಣಾಮ ಉಂಟು ಮಾಡುವುದರಿಂದ ಅದಾಲತ್ಗಳಿಂದ ದೂರ ಇರಲು ನಿರ್ಧರಿಸಲಾಯಿತು ಎಂದು ತಿರುವನಂತಪುರ ಬಾರ್ ಅಸೋಸಿಯೇಶನ್ ತಿಳಿಸಿದೆ.
ಸಭೆಯ ನಿರ್ಧಾರವನ್ನು ಬಾರ್ ಕೌನ್ಸಿಲ್ನ ಅಧ್ಯಕ್ಷರು, ಕೇರಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ತಿರುವನಂತಪುರ ನ್ಯಾಯಾಂಗ ಜಿಲ್ಲೆಯ ಉಸ್ತುವಾರಿ ನ್ಯಾಯಮೂರ್ತಿಗೆ ತಿಳಿಸಲಾಗಿದೆ ಎಂದು ಅಸೋಸಿಯೇಶನ್ನ ಪದಾಧಿಕಾರಿಗಳು ತಿಳಿಸಿದ್ದಾರೆ.