ಹೊಸ ರಾಜಕೀಯ ಪಕ್ಷ ಸ್ಥಾಪನೆ: ಚಂದ್ರಶೇಖರ ಆಝಾದ್ ಘೋಷಣೆ
ಫೈಲ್ ಫೋಟೊ
ಹೊಸದಿಲ್ಲಿ, ಡಿ.13: ದಲಿತರ ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶದಿಂದ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದೇನೆ ಎಂದು ಭೀಮ್ ಸೇನೆಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಘೋಷಿಸಿದ್ದಾರೆ.
ತಮ್ಮ ಪಕ್ಷವು ‘ಬಹುಜನ ಸಮಾಜ’(ದಲಿತರು)ಕ್ಕೆ ಹೊಸ ರಾಜಕೀಯ ಆಯ್ಕೆಯನ್ನು ಒದಗಿಸಲಿದೆ. ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಪ್ರಾಮಾಣಿಕ, ಶ್ರಮಿಕ ಯುವಜನತೆ ಕೈಜೋಡಿಸಿ ಪಕ್ಷವನ್ನು ಮುನ್ನಡೆಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಇನ್ನು ಮುಂದೆ ಕೆಲಸ ಮಾಡುವವರು ರಾಜಕಾರಣಿಗಳಾಗುತ್ತಾರೆ, ಹಣ ಇದ್ದವರು ಅಲ್ಲ. ಜೈ ಭೀಮ್’ ಎಂದು ಆಝಾದ್ ಟ್ವೀಟ್ ಮಾಡಿದ್ದಾರೆ.
ನೀವು ನನ್ನ ಮೇಲಿಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಈಗ ನೀವೇ ಮುಂದೆ ನಿಂತು ಈ ಪಕ್ಷಕ್ಕೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡಬೇಕು ಎಂದವರು ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Next Story