ಇಂತಹ ಹಿಂಸಾಚಾರ ದೇಶದ ಸಿದ್ಧಾಂತಕ್ಕೆ ವಿರುದ್ಧವಾದದ್ದು: ಜೆಎನ್ ಯು ಪ್ರಕರಣದ ಬಗ್ಗೆ ಗಂಭೀರ್
ಹೊಸದಿಲ್ಲಿ, ಜ. 6: ಜೆಎನ್ ಯು ಮೇಲಿನ ಗೂಂಡಾ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್, 'ಇಂತಹ ಹಿಂಸಾಚಾರಗಳು ದೇಶದ ಸಿದ್ಧಾಂತಕ್ಕೆ ವಿರುದ್ಧವಾದದ್ದು' ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗಳಲ್ಲಿ ನಡೆಯುವ ಇಂತಹ ಹಿಂಸಾಚಾರಗಳು ಈ ದೇಶದ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾದುದು. ನಮ್ಮ ಮನಸ್ಸಿನಲ್ಲಿ ಯಾವ ಸಿದ್ಧಾಂತ ಇದೆ ಎಂಬುದು ಮುಖ್ಯವಲ್ಲ. ಆದರೆ, ವಿದ್ಯಾರ್ಥಿಗಳನ್ನು ಈ ರೀತಿ ಗುರಿಯಾಗಿರಿಸಿ ದಾಳಿ ಮಾಡಬಾರದು. ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗೆ ಪ್ರವೇಶಿಸಿದ ಈ ಗೂಂಡಾಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಹೇಳಿದ್ದಾರೆ.
Such violence on university campus is completely against the ethos of this country. No matter what the ideology or bent of mind, students cannot be targeted this way. Strictest punishment has to be meted out to these goons who have dared to enter the University #JNU
— Gautam Gambhir (@GautamGambhir) January 5, 2020