ದಲಿತ ದಂಪತಿಯ ಬೆಳೆ ನಾಶಗೈದು ಮಕ್ಕಳ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು; ವಿಷ ಕುಡಿದ ದಂಪತಿ
ಅಮಾನವೀಯ ಘಟನೆಯ ವಿಡಿಯೋ ವೈರಲ್ , ವ್ಯಾಪಕ ಆಕ್ರೋಶ
ಮಧ್ಯಪ್ರದೇಶ: ದಲಿತ ದಂಪತಿ ಬೆಳೆದಿದ್ದ ಬೆಳೆಗಳನ್ನು ಕಂದಾಯ ಅಧಿಕಾರಿಗಳು ನಾಶಪಡಿಸುತ್ತಿರುವುದು ಮತ್ತು ಇದರಿಂದ ಮನನೊಂದ ದಂಪತಿ ವಿಷ ಸೇವಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಭಾರೀ ಆಕ್ರೋಶ ಸೃಷ್ಟಿಸಿದೆ.
ದಂಪತಿ ವಾಸವಿದ್ದ ಜಾಗ ಸರಕಾರಕ್ಕೆ ಸೇರಿದ್ದು, ಅಲ್ಲಿ ಕಾಲೇಜು ನಿರ್ಮಾಣದ ಹಿನ್ನೆಲೆಯಲ್ಲಿ ಬಲವಂತವಾಗಿ ದಂಪತಿಯನ್ನು ಒಕ್ಕಲೆಬ್ಬಿಸಲಾಗುತ್ತಿತ್ತು. ದಂಪತಿ ಬೆಳೆದಿದ್ದ ಬೆಳೆಯನ್ನು ಕಣ್ಣೆದುರಲ್ಲೇ ಅಧಿಕಾರಿಗಳು ನಾಶಗೈದರು. ಈ ಸಂದರ್ಭ ದಂಪತಿ ಕೀಟನಾಶಕ ಸೇವಿಸಿದರು.
ದಂಪತಿಯನ್ನು ಎಳೆದೊಯ್ಯುವ ಪೊಲೀಸರು ಬಯಲಲ್ಲಿ ಅವರಿಗೆ ಥಳಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಕೂಡಲೇ ಮಕ್ಕಳು ಓಡಿ ಬಂದು ಹೆತ್ತವರನ್ನು ರಕ್ಷಿಸಲು ಯತ್ನಿಸಿದರೂ ಪೊಲೀಸರು ಅವರನ್ನು ದೂರ ತಳ್ಳುವುದು ಕಾಣಿಸುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಮ್ಮ ಹೋರಾಟ ಈ ಮನಸ್ಥಿತಿ ಮತ್ತು ಅನ್ಯಾಯದ ವಿರುದ್ಧ” ಎಂದಿದ್ದಾರೆ.
ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಗುಣಾ ಎಸ್ಪಿ ಮತ್ತು ಕಲೆಕ್ಟರನ್ನು ಅಮಾನತುಗೊಳಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾಹಿತಿ ನೀಡಿದ್ದಾರೆ.
हमारी लड़ाई इसी सोच और अन्याय के ख़िलाफ़ है। pic.twitter.com/egGjgY5Awm
— Rahul Gandhi (@RahulGandhi) July 16, 2020
मध्यप्रदेश के गुना में @ChouhanShivraj जी की पुलिस द्वारा गरीब दलित किसान परिवार के साथ हुई बर्बरता की जितनी निंदा की जाए कम है।
— Devashish Jarariya (@jarariya91) July 15, 2020
गरीब किसान की फसल पर JCB चलाया जा रहा था पिता ने कीटनाशक पी लिया, फिर भी पुलिस का दिल नही पिघला खूब लाठी डंडे चलाए।
वाह शिवराज जी वाह pic.twitter.com/4YVawkI5sx
After the incident, videos showed police thrashing some locals. IG Gwalior says, "People were trying to resist police's humanitarian rescue move, so we had to shoo them away," Here is the full video which shows cops thrashing the local despite restraining him. @TheQuint pic.twitter.com/eFsoctnTsI
— Asmita Nandy (@NandyAsmita) July 15, 2020