ಪ್ರಸಾದಕ್ಕಾಗಿ ಇಟ್ಟಿದ್ದ ಹಣ್ಣುಗಳನ್ನು ಕದ್ದ ಆರೋಪ: ಬಾಲಕರನ್ನು ಕಟ್ಟಿ ಹಾಕಿ, ಥಳಿಸಿದ ದುಷ್ಕರ್ಮಿಗಳು
ಲಕ್ನೋ: ಪ್ರಸಾದಕ್ಕಾಗಿ ಇರಿಸಲಾಗಿದ್ದ ಹಣ್ಣುಗಳನ್ನು ಕದ್ದ ಆರೋಪದಲ್ಲಿ ಇಬ್ಬರು ಬಾಲಕರನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ. ಬಾಲಕರಿಬ್ಬರನ್ನೂ ಹಗ್ಗದಿಂದ ಕಟ್ಟಿ ಹಾಕಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಜುಲೈ 24ರಂದು ನಸೀತಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಶಾಲೆಯೊಂದರ ಸಮೀಪ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಪ್ರಸಾದಕ್ಕೆಂದು ಶಾಲೆಯಲ್ಲಿ ಹಣ್ಣುಗಳನ್ನು ಇರಿಸಲಾಗಿತ್ತು. ಇಬ್ಬರು ಬಾಲಕರು ಹಣ್ಣುಗಳನ್ನು ಕದ್ದು ತಿಂದಿದ್ದರು ಎನ್ನಲಾಗಿದೆ. ಇದನ್ನು ನೋಡಿದ ಇಬ್ಬರು ಯುವಕರು ಬಾಲಕರನ್ನು ಶಾಲೆಗೆ ಕರೆ ತಂದು ಹಗ್ಗದಿಂದ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಬಗ್ಗೆ ಎಫ್ ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
Next Story