ಮಂದಿರ ಶಿಲಾನ್ಯಾಸದ ದಿನವೇ ಟ್ವಿಟರ್ ನಲ್ಲಿ ಟ್ರೆಂಡ್ ಆದ 'ತಮಿಳರ ದೊರೆ ರಾವಣ'
ಹೊಸದಿಲ್ಲಿ, ಆ.5: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿದ ಕ್ಷಣದಿಂದಲೇ ರಾಮನ ಬದ್ಧವೈರಿ ಎಂದೇ ಪರಿಗಣಿಸಲ್ಪಟ್ಟ ರಾವಣನ ಬಗ್ಗೆ ತಮಿಳು ಟ್ವಿಟರ್ನಲ್ಲಿ ಬಿರುಸಿನ ಚರ್ಚೆ ಆರಂಭವಾಗಿದೆ.
ಟ್ವಿಟರ್ನಲ್ಲಿ 'ಲ್ಯಾಂಡ್ ಆಫ್ ರಾವಣ, ತಮಿಳರ ಹೆಮ್ಮೆ ರಾವಣ' ಎಂಬ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿವೆ.
ಬುಧವಾರ ಬೆಳಿಗ್ಗೆ 'ತಮಿಳು ದೊರೆ ರಾವಣನ್' ಎಂದು ತಮಿಳು ಭಾಷೆಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸುವುದರೊಂದಿಗೆ ಈ ಸರಣಿ ಟ್ವೀಟ್ಗಳು ಆರಂಭವಾದವು. ರಾವಣ ಶೈವರ ದೊರೆ ಎಂದು ಕೆಲವರು ಹೇಳಿದರೆ, ಈತನನ್ನು ಸಿಂಹಳೀಯರು ದೇವರೆಂದು ಪೂಜಿಸುತ್ತಾರೆ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದರು. ಈತ ಬ್ರಾಹ್ಮಣ ಎಂದೂ ಕೆಲವರು ಟ್ವೀಟ್ ಮಾಡಿದರು. ತಮಿಳುನಾಡಿನಲ್ಲಿ ಶೀಘ್ರ ರಾವಣ ದೇಗುಲ ನಿರ್ಮಿಸಲಾಗುವುದು. ರಾವಣ ತಮಿಳುನಾಡಿಗಷ್ಟೇ ಅಲ್ಲ, ಭೂಮಂಡಲಕ್ಕೇ ಹೆಮ್ಮೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
‘ರಾಮಾಯಣವು ಜನಾಂಗೀಯ ಮಹಾಕಾವ್ಯವಾಗಿದ್ದು ಇದು ತಮಿಳರು ಮತ್ತು ದಕ್ಷಿಣ ಭಾರತದ ಜನರನ್ನು ತುಚ್ಛ, ನೀಚ, ಕ್ರೂರ, ರಾಕ್ಷಸರು ಮತ್ತು ಕೋತಿಗಳೆಂದು ಚಿತ್ರಿಸಿದೆ. ರಾಮನು ನಮ್ಮ ದೇವರಲ್ಲ, ಆದರೆ ರಾವಣ ನಮ್ಮ ಚಕ್ರವರ್ತಿ’ ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಲಾಗಿದೆ.
உங்க வட நாட்டுல இராம லீல என்றால்,எங்கள் தமிழ்நாட்டில் இராவண பெருவிழா,கலை பத்தில் தலை சிறந்தவன் திசை எட்டும் புகழ் கொண்டன் நாங்கள் இராவண பெரும்பாட்டணின் பிள்ளைகள் #tamilprideravanan pic.twitter.com/PqV3awq78B
— இரா.சிவராஜ் (@NCvrZaM26z0ZQ8w) August 5, 2020
#இராவணன் என்ற ஒருவரின் புகழை வீழ்த்த நினைத்த சங்கிகள் 300க்கும் மேற்பட்ட பல வகையிலான கதை அம்சம் கொண்ட ராமாயணம் என்ற கதைகளின் மூலம் இன்றுவரை அவரை வீழ்த்த முடியாமல் இன்றும் அவரை வீழ்த்த முயன்று கொண்டிருக்கிறார்கள்.
— Avinash Shanmugham (@avinashvcc) August 5, 2020
#Ravanan #ராவணேஸ்வரன் #ராவணன் #LandOfRavanan #tamilprideravanan
India is the land of ravanan
— கற்றது அரசியல் (@Learnedpolitics) August 5, 2020
there is no space for any Rama #LandOfRavanan pic.twitter.com/MbVEMzCZyI