ಪ್ರಶಾಂತ್ ಭೂಷಣ್ ಪ್ರಕರಣ: ಸೋಮವಾರ ಶಿಕ್ಷೆ ಘೋಷಿಸಲಿರುವ ಸುಪ್ರೀಂ
ಹೊಸದಿಲ್ಲಿ, ಆ.29: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸೋಮವಾರ ಶಿಕ್ಷೆಯ ತೀರ್ಪು ನೀಡಲಿದೆ ಎಂದು ವರದಿಯಾಗಿದೆ.
ನ್ಯಾಯಾಂಗ ವ್ಯವಸ್ಥೆ ಹಾಗೂ ಮುಖ್ಯ ನ್ಯಾಯಾಧೀಶ ಎಸ್ಎ ಬೋಬ್ಡೆ ವಿರುದ್ಧ ಮಾಡಿರುವ ಟ್ವೀಟ್ ಹಿನ್ನೆಲೆಯಲ್ಲಿ ಭೂಷಣ್ ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು ಮತ್ತು ಕ್ಷಮೆ ಯಾಚನೆಗೆ ಸೂಚಿಸಿ 3 ದಿನದ ಕಾಲಾವಕಾಶ ನೀಡಿತ್ತು. ತನ್ನ ಹೇಳಿಕೆಯನ್ನು ಮರುಪರಿಶೀಲಿಸಿ ಹಿಂಪಡೆಯುವ ಬಗ್ಗೆ ಪರಿಶೀಲಿಸುವಂತೆ ಮತ್ತು ಬೇಷರತ್ ಕ್ಷಮೆ ಯಾಚನೆಗೆ ಸುಪ್ರೀಂಕೋರ್ಟ್ ತಿಳಿಸಿತ್ತು. ಆಗಸ್ಟ್ 24ರಂದು ಈ ಅವಧಿ ಮುಗಿದಿದ್ದು ಮರುದಿನ ನಡೆದ ಕೋರ್ಟ್ ಕಲಾಪದಲ್ಲಿ ಕ್ಷಮೆ ಕೋರಲು ಭೂಷಣ್ ನಿರಾಕರಿಸಿದ್ದರು.
Next Story