ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ: ಪ್ರಧಾನ ಆರೋಪಿ ಸೆರೆ
ಕಣ್ಣೂರ್, ಮೇ 23: ರಾಮಂತಳಿಯಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಬಿಜು ಕೊಲೆ ಪ್ರಕರಣದ ಪ್ರಧಾನ ಆರೋಪಿ ಡಿವೈಎಫ್ಐ ನಾಯಕ ಅನೂಪ್ನನ್ನು ಪೊಲೀಸರು ಬಂಧಿಸಿದ್ದಾರೆ.ನಿನ್ನೆ ರಾತ್ರಿ ಪಯ್ಯನ್ನೂರ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಪೊಲೀಶರು ಆತನ್ನು ವಶಕ್ಕೆ ಪಡೆದಿದ್ದಾರೆ. ಬಿಜು ಕೊಲೆ ಮಾಡಿದ ತಂಡದ ಮುಖ್ಯಸ್ಥ ಈತನೆಂದು ಪೊಲೀಸರು ಹೇಳುತ್ತಿದ್ದಾರೆ. ಅನೂಪ್ ಸಹಿತ ಇನ್ನೋವ ಕಾರಿನಲ್ಲಿ ಬಂದಿದ್ದ ಏಳು ಮಂದಿ ಸೇರಿ ಬಿಜುವನ್ನು ಕೊಲೆಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಬಂಧಿಸಿದ್ದ ಆರೋಪಿಗಳು ಪೊಲೀಸರಿಗೆ ಇದನ್ನು ಹೇಳಿದ್ದಾರೆ. ಸತ್ಯನ್ , ಜಿತಿನ್, ರಿನೇಶ್, ಜ್ಯೋತಿಷ್ರನ್ನು ಪೊಲೀಸರು ಈ ಮೊದಲು ಬಂಧಿಸಿದ್ದರು. ಈಗ ಪ್ರಧಾನ ಆರೋಪಿ ಅನೂಪ್ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ವಿಚಾರಣೆ ತ್ವರಿತಗತಿಯಲ್ಲಿ ನಡೆಯಲಿದೆ ಎಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
Next Story