ಜಾಧವ್ಗೆ ಮನವಿ ಸಲ್ಲಿಸುವ ಅವಕಾಶವಿದೆ: ಅಬ್ದುಲ್ ಬಾಸಿತ್
ಹೊಸದಿಲ್ಲಿ, ಜೂ. 21: ಕುಲ್ಭೂಷಣ್ ಪ್ರಕರಣವನ್ನು ಮರು ಚಿಂತಿಸಲು ಅವಕಾಶವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರು ಜಾಧವ್ ಬಗ್ಗೆ ಮೃದು ನಿಲುವು ಇರುವ ಬಗ್ಗೆ ಸೂಚನೆ ನೀಡಿದ್ದಾರೆ.
ಜಾಧವ್ಗೆ ಪಾಕಿಸ್ತಾನದ ಮನವಿ ಪ್ರಕ್ರಿಯೆಯಲ್ಲಿ ಕೆಲವು ಹಂತಗಳು ಇವೆ ಎಂದು ಬಾಸಿತ್ ಹೇಳಿದ್ದಾರೆ.
ಜಾಧವ್ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದರೆ, ಸೇನಾ ಮುಖ್ಯಸ್ಥ ಜನರಲ್ ಖಮರ್ ಬಾಜ್ವಾ ಹಾಗೂ ಅಧ್ಯಕ್ಷ ಮಮ್ನೂನ್ ಹುಸೈನ್ ಅವರಿಗೆ ಮನವಿ ಸಲ್ಲಿಸುವ ಅವಕಾಶ ಇದೆ ಎಂದು ಅವರು ಹೇಳಿದರು.
Next Story