ಕೋವಿಂದ್ ಅಭ್ಯರ್ಥನದ ವಿರುದ್ಧ ರಾಜಕೀಯ ಹೋರಾಟ: ಪಿಣರಾಯಿ ವಿಜಯನ್
ತಿರುವನಂತಪುರಂ, ಜೂ. 21: ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಬಿಜೆಪಿಯ ರಾಜಕೀಯ ಅಭ್ಯರ್ಥಿ ಹಾಗೂ ಅವರು ಅಭ್ಯರ್ಥನವನ್ನು ರಾಜಕೀಯವಾಗಿಯೇ ಎದುರಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ.
ಕೋವಿಂದ್ ವಿರುದ್ಧ ವಿಪಕ್ಷ ಅಭ್ಯರ್ಥಿಯನ್ನು ನಿಲ್ಲಿಸಬೇಕೇ ಎಂಬ ಬಗ್ಗೆ ನಿರ್ಧಾರವನ್ನು ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಳ್ಳಬೇಕಿದೆ ಎಂದು ವಿಜಯನ್ ತಿಳಿಸಿದರು.
ಕೋವಿಂದ್ ಅವರನ್ನು ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿರುವುದಕ್ಕೆ ಮುಖ್ಯ ಕಾರಣ ಅವರು ಬಿಜೆಪಿಯ ನಾಯಕ ಎಂದು ಅವರು ತಿಳಿಸಿದರು. ಕೋವಿಂದ್ ಬಿಜೆಪಿಯ ರಾಜಕೀಯ ಅಭ್ಯರ್ಥಿ. ಆದುದರಿಂದ ಅವರನ್ನು ರಾಜಕೀಯವಾಗಿಯೇ ಎದುರಿಸಬೇಕು ಎಂದು ವಿಜಯನ್ ಹೇಳಿದರು.
Next Story