ಗೋಮಾಂಸ ಸಾಗಾಟ ಆರೋಪ: ವ್ಯಕ್ತಿಗೆ ಥಳಿಸಿದ ಗೋರಕ್ಷಕರ ಗುಂಪು
ಹೊಸದಿಲ್ಲಿ, ಜು.13: ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಆರೋಪದಲ್ಲಿ ವ್ಯಕ್ತಿಯೊಬ್ಬರಿಗೆ ಗೋರಕ್ಷಕರ ಗುಂಪೊಂದು ನಿರ್ದಯವಾಗಿ ಥಳಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ನಾಗ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೋರ್ವನನ್ನ ಸುತ್ತುವರಿದ ದುಷ್ಕರ್ಮಿಗಳು ಗುಂಪು ನಿರ್ದಯವಾಗಿ ಥಳಿಸುತ್ತಿರುವುದು ದೃಶ್ಯದಲ್ಲಿದೆ.
#WATCH: Man beaten up for allegedly carrying beef in Nagpur's Bharsingi, no arrests have been made yet. #Maharashtra (July 12th) pic.twitter.com/JiFAZMfRSS
— ANI (@ANI_news) 13 July 2017
Next Story