ಏನು ತಿನ್ನಬೇಕು ಎನ್ನುವುದು ಜನರ ಆಯ್ಕೆ: ಕೇಂದ್ರ ಸಚಿವ ಅಲ್ಫೋನ್ಸ್
ಹೊಸದಿಲ್ಲಿ,ಸೆ. 9: ಏನು ತಿನ್ನಬೇಕು ಎನ್ನುವುದು ಜನರ ಆಯ್ಕೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್ ಕಣ್ಣಂದಾನಂ ಹೇಳಿದ್ದಾರೆ. ಭುವನೇಶ್ವರದಲ್ಲಿ ನೀಡಿದ್ದ ತನ್ನ ಹೇಳಿಕೆಯನ್ನು ತಿರುಚಲಾಗಿದೆ. ಇಲ್ಲಿಗೆ ವಿದೇಶಿಯರು ಬರುವುದು ಬೀಫ್ ತಿನ್ನಲಿಕ್ಕಲ್ಲ. ಭಾರತವನ್ನು ನೋಡುವುದಕ್ಕಾಗಿದೆ ಎಂದಿದ್ದೆ.
ಬೀಫ್ ತಿನ್ನಬೇಕು ಎಂದು ಕೇರಳದಲ್ಲಿರುವವರು ತೀರ್ಮಾನಿಸಬಹುದು. ದಿಲ್ಲಿಯಲ್ಲಿ ಬೀಫ್ ನಿಷೇಧ ಈ ಹಿಂದೆಯೇ ಜಾರಿಯಲ್ಲಿದೆ. ಅದಕ್ಕೆ ಬಿಜೆಪಿಯನ್ನು ದೂಷಿಸಿ ಪ್ರಯೋಜನವಿಲ್ಲ ಎಂದು ಒಂದು ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಕಣ್ಣಂದಾನಂ ಹೇಳಿದರು.
ಈ ಹಿಂದೆ ವಿದೇಶಿಯರು ತಮ್ಮ ಊರಿನಲ್ಲಿಯೇ ಬೀಫ್ ತಿಂದು ಭಾರತಕ್ಕೆ ಬಂದರೆ ಸಾಕೆಂದು ಸಚಿವ ಅಲ್ಫೋನ್ಸ್ ಕಣ್ಣಂದಾನಂ ಹೇಳಿದ್ದರು.
Next Story