ರಾಜಕೀಯ ದ್ವೇಷದಲ್ಲಿ ಹಿಂದೂ ಯುವಕರ ಕೊಲೆಗೈಯುವ ಬಿಜೆಪಿ ಹಿಂದುತ್ವದ ಪ್ರಚಾರಕರಾಗುವುದು ವಿಪರ್ಯಾಸ
ಕೇರಳ ಶಿವಸೇನೆ ಮುಖ್ಯಸ್ಥ
ತಿರುವನಂತಪುರಂ, ಅ.16: ರಾಜಕೀಯ ದ್ವೇಷದಲ್ಲಿ ಹಿಂದೂ ಯುವಕರನ್ನೇ ಕೊಲೆ ಮಾಡುತ್ತಿರುವ ಬಿಜೆಪಿ ಹಿಂದುತ್ವದ ಪ್ರಚಾರಕರಾಗುವುದು ವಿಪರ್ಯಾಸ ಎಂದು ಕೇರಳ ಶಿವಸೇನಾ ರಾಜ್ಯ ಪ್ರಮುಖ್ ಎಂ.ಎಸ್. ಭುವನಚಂದ್ರನ್ ಹೇಳಿದ್ದಾರೆ.
ವೆಂಗರಾ ಉಪಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿರುವ ಮತಗಳು ಬಿಜೆಪಿ ಕೇರಳ ರಾಜಕೀಯದಲ್ಲಿ ಪ್ರಾಮುಖ್ಯತೆ ಕಳಕೊಂಡಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಕುಮ್ಮನಂ ನೇತೃತ್ವದಲ್ಲಿ ನಡೆದ ಜನರಕ್ಷಾ ಯಾತ್ರೆಯು ಇದರೊಂದಿಗೆ ಮಹತ್ವ ಕಳೆದುಕೊಂಡಿದೆ. ವೆಂಗರಾ ಉಪಚುನಾವಣೆಯಲ್ಲಿ ಬಿಡಿಜೆಎಸ್ ವೋಟುಗಳು ಎಡಪಕ್ಷಕ್ಕೆ ಹೋಗಿದ್ದು, ಇದು ಬಿಜೆಪಿಗೆ ಸಿಕ್ಕ ಮತಗಳ ಪ್ರಮಾಣ ಕಡಿಮೆಯಾಗಲು ಕಾರಣ ಎಂದು ಅವರು ಹೇಳಿದರು.
Next Story