ನಿವೃತ್ತ ಶಿಕ್ಷಕ ಬಿ.ರಾಮಚಂದ್ರ
ಬೆಳ್ತಂಗಡಿ, ಮೇ 3: ಗೇರುಕಟ್ಟೆ ನಿವಾಸಿ ಹಾಗೂ ಉಜಿರೆಯ ಎಸ್ಡಿಎಂ ಹೈಸ್ಕೂಲಿನ ನಿವೃತ್ತ ಶಿಕ್ಷಕ ಬಿ.ರಾಮಚಂದ್ರ (75) ಅಲ್ಪಕಾಲದ ಅನಾರೋಗ್ಯದಿಂದ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಮುದ್ರಣ ತಂತ್ರಜ್ಞಾನದಲ್ಲಿ ವಿಶೇಷ ತರಬೇತಿ ಪಡೆದಿದ್ದ ಅವರು ಎಸ್ಡಿಎಂ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಹಾಗೂ ಮಂಜುಶ್ರೀ ಮುದ್ರಣಾಲಯದಲ್ಲಿ ಮುಖ್ಯ ವ್ಯವಸ್ಥಾಪಕರಾಗಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ 1999ರಲ್ಲಿ ನಿವೃತ್ತರಾದರು. ಎನ್ಸಿಸಿ ನೇವಲ್ ವಿಭಾಗದ ಅಧಿಕಾರಿಯಾಗಿ, ತರಬೇತುದಾರರಾಗಿದ್ದು, ‘ಪ್ರಿಂಟಿಂಗ್ ಮೇಷ್ಟ್ರು’ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಗೇರುಕಟ್ಟೆಯಲ್ಲಿ ನಡೆಯಿತು.
Next Story