ಕೆ.ಎಂ.ಅಶೋಕ್
ಮಂಗಳೂರು, ಆ.5: ಪುತ್ತೂರು ತಾಲೂಕಿನ ಕೆದಂಬಾಡಿ ಸನ್ಯಾಸಿಗುಡ್ಡೆಯ ಕೆ.ಎಂ.ಅಶೋಕ್(62) ಅಲ್ಪಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯೋಗಿಯಾಗಿದ್ದ ಅಶೋಕ್, ‘ದುಡಿ’ ಕುಣಿತದ ಕಲಾವಿದರಾಗಿದ್ದರು. ಬಾಳೆಪುಣಿಯ ನಲಿಪು ಜಾನಪದ ತಂಡದ ಕಲಾವಿದರಾಗಿ ಬೆಂಗಳೂರು, ಚೆನ್ನೈ, ಮೈಸೂರು, ಹಾಸನ, ಮಂಗಳೂರು ಮೊದಲಾದ ಕಡೆಗಳಲ್ಲಿ ಜರುಗಿದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.
ಅಶೋಕ್ ಪತ್ನಿ, ಪುತ್ರಿ, ಪುತ್ರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಸನ್ಯಾಸಿಗುಡ್ಡೆಯಲ್ಲಿ ನಡೆಯಿತು.
Next Story