ನಿಧನ: ಬಿ.ಶಫೀ ಅಹ್ಮದ್
ಶಿಕಾರಿಪುರ ಫೆ.23: ಪಟ್ಟಣದ ಮದನಿ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ, ಹಾಲಿ ಅಧ್ಯಕ್ಷ ,ಪುರಸಭೆಯ ಮಾಜಿ ಸದಸ್ಯ,ಮುಸ್ಲಿಂ ಸಮುದಾಯದ ಮುಖಂಡ ಬಿ.ಶಫೀ ಅಹ್ಮದ್(55) ತೀವ್ರ ಹೃದಯಾಘಾತದಿಂದ ಗುರುವಾರ ಬೆಳಗಿನ ಜಾವ ನಿಧನರಾದರು.
ಅವರು ತಾಯಿ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.
ಪುರಸಭೆಗೆ 2 ಬಾರಿ ಸದಸ್ಯರಾಗಿದ್ದ ಶಫೀ ಅಹ್ಮದ್ ಮದನಿ ಅಲ್ಪಸಂಖ್ಯಾತ ವಿವಿದೋದ್ದೇಶ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘದ ಬೆಳವಣಿಗೆಯಲ್ಲಿ ಬಹು ಮಹತ್ವದ ಪಾತ್ರವನ್ನು ವಹಿಸಿದ್ದರು.ಜನಾನುರಾಗಿಯಾಗಿದ್ದ ಶಫೀ ಅಹ್ಮದ್ ಪಟ್ಟಣದ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು.
ಕಳೆದ ಕೆಲ ದಿನದ ಹಿಂದೆ ಅನಾರೋಗ್ಯದಿಂದಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದ ಅವರಿಗೆ ಗುರುವಾರ ಬೆಳಗಿನ ಜಾವ ಕಾನೂರು ಹೊಸಕೇರಿಯಲ್ಲಿನ ಮನೆಯಲ್ಲಿ ತೀವ್ರ ಹೃದಯಾಘಾತವಾಗಿದ್ದು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಫಲಕಾರಿಯಾಗದೆ ಬೆಳಿಗ್ಗೆ 4 ಕ್ಕೆ ನಿಧನರಾದರು.
ಶಾಸಕ ರಾಘವೇಂದ್ರ,ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ,ಪುರಸಭಾ ಸದಸ್ಯ ಗೋಣಿ ಮಾಲತೇಶ,ವಸಂತಗೌಡ ಮುಸ್ಲಿಂ ಸಮಾಜದ ಅಧ್ಯಕ್ಷ ಯೂಸೂಫ್ ಅಲಿ,ಮುಖಂಡ ಹನೀಫ್ ಸಾಬ್, ಬಿ.ಸಿ ವೇಣುಗೋಪಾಲ್ ಸಹಿತ ಹಲವರು ಅಂತಿಮ ದರ್ಶನ ಪಡೆದರು.
ಮದನಿ ಸಹಕಾರ ಸಂಘದಲ್ಲಿ ಸಂತಾಪ ಸಭೆ:
ಸಂಘದ ಅಧ್ಯಕ್ಷ ಶಫೀ ಅಹ್ಮದ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಗುರುವಾರ ತುರ್ತು ಸಭೆ ನಡೆಸಿ ಸದಸ್ಯರು ಶ್ರದ್ದಾಂಜಲಿ ಸಲ್ಲಿಸಿದರು.