ರಾಮದಾಸ್ ಭಟ್
ಹಿರಿಯ ಕಾಂಗ್ರೆಸಿಗ ರಾಮದಾಸ್ ಭಟ್ ನಿಧನ
ಮಂಗಳೂರು, ಫೆ. 9: ಹಿರಿಯ ಕಾಂಗ್ರೆಸಿಗ ನಗರದ ಬಿಜೈ ನಿವಾಸಿ ಬಿ.ರಾಮದಾಸ್ ಭಟ್ ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಸಹಿತ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಕಳೆದ 35 ವರ್ಷಗಳಿಂದ ನಗರದ ಬಿಜೈ ವಾರ್ಡ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಸಂತಾರ: ಬಿ.ರಾಮದಾಸ್ ಭಟ್ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ. ಜನಾದರ್ನ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕರಾದ ಜೆ.ಆರ್. ಲೋಬೊ, ಮೊದಿನ್ ಬಾವಾ, ಐವನ್ ಡಿಸೋಜ, ಮೇಯರ್ ಜೆಸಿಂತಾ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾಂಗ್ರೆಸ್ ಮುಖಂಡರಾದ ಪಿ.ವಿ. ಮೋಹನ್, ಲ್ಯಾನ್ಸಿಲಾಟ್ ಪಿಂಟೋ, ಸುರೇಶ್ ಬಲ್ಲಾಳ್, ಶಶಿಧರ ಹೆಗ್ಡೆ, ವಿಶ್ವಾಸ್ ದಾಸ್, ಟಿ.ಕೆ. ಸುಧೀರ್, ಪ್ರಕಾಶ್ ಸಾಲಿಯಾನ್, ರಜನೀಶ್, ದೀಪಕ್ ಪೂಜಾರಿ, ರಮಾನಂದ ಪೂಜಾರಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story