ಕನ್ಹಯ್ಯನಂತವರು ಹುಟ್ಟದಂತೆ ಪಠ್ಯ ಬದಲಾವಣೆ !
ರಾಜಸ್ಥಾನ ಸಚಿವ ವಾಸುದೇವ್
ಜೈಪುರ್ , ಮಾ. 17 : ಶಾಲಾ ಪಠ್ಯ ಪುಸ್ತಕಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಅಳವಡಿಸುವ ಮೂಲಕ " ಕನ್ಹಯ್ಯ ಕುಮಾರ್ ಅಂತಹವರು ಹುಟ್ಟದಂತೆ " ಖಾತರಿಪದಿಸಲಾಗುವುದು ಎಂದು ರಾಜಸ್ಥಾನದ ಸಚಿವ ವಾಸುದೇವ್ ದೇವ್ನಾನಿ ಹೇಳಿದ್ದಾರೆ.
" ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಭಾವನೆ ಬೆಳೆಸಲು ಪಠ್ಯ ಪುಸ್ತಕಗಳಲ್ಲಿ ದೊಡ್ಡ ಬದಲಾವಣೆಗಳನ್ನು ತರಲಾಗುತ್ತಿದೆ " ಎಂದು ವಾಸುದೇವ್ ವಿಧಾನ ಸಭೆಯಲ್ಲಿ ತಿಳಿಸಿದರು.
" ಇತ್ತೀಚಿನ ಜೆ ಎನ್ ಯು ಪ್ರಕರಣದ ಬಳಿಕ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಲು ಸರಕಾರೀ ವಿವಿಗಳಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಸೂಚಿಸಲಾಗಿದೆ " ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಕಾಳಿ ಚರಣ್ ಸರಾಫ್ ಹೇಳಿದ್ದಾರೆ.
Next Story