ಉತ್ತರ ಪ್ರದೇಶ: ವಿದ್ಯಾರ್ಥಿನಿಯ ಅಪಹರಣ: ವಿದ್ಯಾರ್ಥಿವೇತನ ಆಭರಣ ಕಿತ್ತುಕೊಂಡು ವಿಷವುಣಿಸಿದ ದುಷ್ಕರ್ಮಿಗಳು
ಒಬ್ಬಳ ಮೃತ್ಯು, ಇನ್ನೊಬ್ಬಳು ನಾಪತ್ತೆ!
ಕನೌಜ್, ಎಪ್ರಿಲ್.5: ವಿದ್ಯಾರ್ಥಿ ವೇತನವನ್ನು ಪಡೆದು ಮರಳುತ್ತಿದ್ದ ವಿದ್ಯಾರ್ಥಿನಿಯರನ್ನು ದುಷ್ಕರ್ಮಿಗಳು ವ್ಯಾನ್ನಲ್ಲಿ ಬಂದು ಲಿಫ್ಟ್ ನೀಡುವುದಾಗಿ ಹೇಳಿ ನಂತರ ಅಪಹರಿಸಿದ ಘಟನೆ ಇಲ್ಲಿಂದ ವರದಿಯಾಗಿದೆ.
ಉತ್ತರ ಪ್ರದೇಶದ ಕನೌಜ್ನ ತಿರ್ವಾದಲ್ಲಿ ಮಾರುತಿ ವ್ಯಾನ್ನಲ್ಲಿ ದರೋಡೆ ಕೋರರು ಇಬ್ಬರು ವಿದ್ಯಾರ್ಥಿನಿಯನ್ನು ಲೂಟಿ ಮಾಡಿದ್ದಲ್ಲದೆ ವಿರೋಧಿಸಿದ್ದಕ್ಕಾಗಿ ಒಬ್ಬಳು ವಿದ್ಯಾರ್ಥಿನಿಯ ಮುಖಕ್ಕೆ ಬಟ್ಟೆ ತುರುಕಿ ಚಲಿಸುತ್ತಿರುವ ವ್ಯಾನ್ನಿಂದ ಕೆಳಗೆ ದೂಡಿ ಹಾಕಿದ್ದರು. ಇನ್ನೊಬ್ಬಳು ವಿದ್ಯಾರ್ಥಿನಿಯನ್ನು ಬಲವಂತದಿಂದ ವಿಷ ಕುಡಿಯುವಂತೆ ಮಾಡಿ ಇಂದರ್ಗಢ ಎಂಬಲ್ಲಿ ಬಿಟ್ಟು ಹೋಗಿದ್ದಾರೆಂದು ವರದಿಯಾಗಿದೆ. ಈ ವಿದ್ಯಾರ್ಥಿನಿ ಕೆಲವೇ ಹೊತ್ತಿನಲ್ಲಿ ಮೃತಳಾದರೆ ವ್ಯಾನ್ನಿಂದ ಹೊರಗೆಸೆದ ವಿದ್ಯಾರ್ಥಿನಿ ಇನ್ನೂ ನಾಪತ್ತೆಯಾಗಿದ್ದಾಳೆಂದು ವರದಿಗಳು ತಿಳಿಸಿವೆ.
ಮೆಡಿಕಲ್ ಕಾಲೇಜ್ನಲ್ಲಿದ್ದ ತಿರ್ವಾದ ಕೋತ್ವಾಲಿ ಡಡಿಯನ್ ಗ್ರಾಮದ ನಿವಾಸಿ ವೇದರಾಮ್ ತಿಳಿಸಿರುವ ಪ್ರಕಾರ ಅವರ ಮಗಳು ರುಚಿ(19) ಗೌತಮ್ ಬುದ್ಧ ಡಿಗ್ರಿ ಕಾಲೇಜ್ನ ಬಿಎಸ್ಎಸ್ಸಿ ವಿದ್ಯಾರ್ಥಿನಿಯಾಗಿದ್ದಾಳೆ ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಇಂದಿರಾಗಡ ಶಾಖೆಯಿಂದ 3,500 ರೂಪಾಯಿ ತೆಗೆದು ಬರುತ್ತಿದ್ದಾಗ ಅವಳ ಗೆಳತಿ ಸಿಕ್ಕಿದ್ದಳು.ಇಬ್ಬರೂ ತಿರ್ವಾಕ್ಕೆ ಬರುವಾಗ ಇಂದರಾಗಡ ಖಾಸಗಿ ಬಸ್ನ ಸ್ಟಾಂಡ್ನಲ್ಲಿ ನಿಂತಿದ್ದರು. ಆಗ ಒಬ್ಬ ವ್ಯಾನ್ ಚಾಲಕ ತಿರ್ವಾಕ್ಕೆ ಹೋಗುವುದಾಗಿ ಹೇಳಿ ಅವರನ್ನು ಹತ್ತಿಸಿಕೊಂಡಿದ್ದ. ಇಬ್ಬರೂ ವ್ಯಾನ್ಗೆ ಹತ್ತಿದ್ದಾಗ ಅದರಲ್ಲಿದ್ದ ನಾಲ್ವರು ದುಷ್ಕರ್ಮಿಗಳಲ್ಲಿ ಒಬ್ಬ ಚಾಕು ತೋರಿಸಿ ಬೆದರಿಸಿದ್ದ. ಮತ್ತು ವ್ಯಾನ್ನ್ನು ತಿರ್ವಾದೆಡೆಗೆ ಚಲಾಯಿಸಿ ಬರಲಾಗಿತ್ತು. ದುಷ್ಕರ್ಮಿಗಳು ರುಚಿಯಿಂದ 3500 ನಗದು ಮೊಬೈಲ್, ಬೆಳ್ಳಿಯ ಬಳೆ ಮತ್ತು ಇತರ ಆಭರಣಗಳನ್ನು ಕಿತ್ತುಕೊಂಡರು. ಗೆಳತಿ ವಿರೋಧಿಸಿದಾಗ ದುಷ್ಕರ್ಮಿಗಳು ಅವಳ ಮುಖಕ್ಕೆ ಬಟ್ಟೆ ತುರುಕಿ ಚಲಿಸುವ ವ್ಯಾನ್ನಿಂದ ಕೆಳಕ್ಕೆ ಎಸೆದರು. ಸ್ವಲ್ಪದೂರ ಬಂದಮೇಲೆ ರುಚಿಗೆ ಬಲವಂತದಿಂದ ವಿಷವುಣಿಸಿ ಇಂದರ್ಗಡದ ಸಮೀಪ ಬಿಟ್ಟು ಹೋಗಿದ್ದಾರೆ ಎಂದು ರುಚಿಯ ತಂದೆ ತಿಳಿಸಿರುವುದಾಗಿ ವರದಿಯಾಗಿದೆ.