ಹಿಮಾಚಲ ಪ್ರದೇಶ: ಕುಸ್ತಿ ಆಡುತ್ತಲೇ ಪ್ರಾಣ ಕಳಕೊಂಡ ಪೈಲ್ವಾನ!
ಸಿಂಹುತಾ,ಜೂನ್, 14: ಹಿಮಾಚಲ ಪ್ರದೇಶದ ಸಿಂಹುತಾ ಎಂಬಲ್ಲಿಗೆ ಸಮೀಪದಲ್ಲಿರುವ ಛಲಾಡಾ ಗ್ರಾಮದಲ್ಲಿ ಕುಸ್ತಿ ಆಯೋಜಿಸಲಾಗಿತ್ತು. ಇದರಲ್ಲಿ ಗಗಾಹರ್ ನಿವಾಸಿ ಪಂಪುಯಾನೆ ರವೀಂದ್ರ ಎಂಬ ಪೈಲ್ವಾನರು ಕುಸ್ತಿಯಲ್ಲಿ ಆಡುವ ವೇಳೆಯೇ ಗಂಭೀರ ಗಾಯಗೊಂಡು ಅಸುನೀಗಿದ ಘಟನೆ ವರದಿಯಾಗಿದೆ. ಕುಸ್ತಿ ಆಡುವಾಗ ಪೈಲ್ವಾನರ ತಲೆಗೆ ಗಾಯವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿನ ವೈದ್ಯರು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿದ್ದರು. ರವೀಂದ್ರರನ್ನು ಈ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಈ ವರ್ಷ ಎರಡನೆ ಪ್ರಕರಣ:
ಕುಸ್ತಿಯಲ್ಲಿ ಪೈಲ್ವಾನರು ಮೃತರಾದ ಎರಡನೇ ಘಟನೆ ಇದು. ಕಳೆದ ಎಪ್ರಿಲ್ನಲ್ಲಿ ರಾಂಚಿಯಲ್ಲಿ ಹದಿನಾರು ವರ್ಷದ ಕುಸ್ತಿಪಟು ಸಂತೋಷ್ ಉರಾಂವ್ ಅಭ್ಯಾಸ ನಡೆಸುತ್ತಿದ್ದಾಗ ಗಾಯಗೊಂಡು ಮೃತರಾಗಿದ್ದರು.
Next Story