ಬಿರಿಯಾನಿಗೆ ಕೈ ಹಾಕಿದ ಗೋಸೇವಾ ಆಯೋಗದ ಅಧ್ಯಕ್ಷನಿಗೆ ಸಿಎಂ ಛೀಮಾರಿ
ಗುರ್ಗಾಂವ್, ಸೆ.11: ಮೇವಟ್ ಬಿರಿಯಾನಿಗೆ ಕೈ ಹಾಕಿದ ಗೋಸೇವಾ ಆಯೋಗದ ಅಧ್ಯಕ್ಷ ಭನಿರಾಂ ಮಂಗ್ಲ ಅವರಿಗೆ ಸಿಎಂ ಮನೋಹರಲಾಲ್ ಖಟ್ಟರ್ ಛೀಮಾರಿ ಹಾಕಿದ್ದಾರೆ. ಈದ್ ಹಬ್ಬಕ್ಕೆ ಕೆಲ ದಿನಗಳ ಮುನ್ನ ಬಿರಿಯಾನಿ ಸ್ಯಾಂಪಲ್ಗಳನ್ನು ಸಂಗ್ರಹಿಸಿದ ಗೋಸೇವಾ ಆಯೋಗದ ಅಧ್ಯಕ್ಷರ ಕ್ರಮದ ವಿರುದ್ಧ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖಟ್ಟರ್, ಮಂಗ್ಲ ಅವರಿಗೆ ಛೀಮಾರಿ ಹಾಕಿದ್ದಾರೆ.
"ಮಾದರಿಗಳನ್ನು ಸಂಗ್ರಹಿಸುವಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯನ್ನೂ ಇದರಲ್ಲಿ ತೊಡಗಿಸಿಕೊಳ್ಳಬೇಕು. ಮಾದರಿಗಳನ್ನು ಇಲಾಖೆಯೇ ಸಂಗ್ರಹಿಸಬೇಕು" ಎಂದು ಸಿಎಂ ಸೂಚನೆ ನೀಡಿದ್ದಾಗಿ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
Next Story