ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಡಿಎಂಕೆ
ಚೆನ್ನೈ, ಸೆ.21: ಕಾವೇರಿ ನಿರ್ವಹಣ ಮಂಡಳಿ ರಚಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ತಮಿಳುನಾಡಿನ ರೈತರ ಹಲವು ವರ್ಷಗಳ ದುಃಖ ಹಾಗೂ ಕಣ್ಣೀರಿಗೆ ಸಿಕ್ಕಿದ ಜಯ. ಉಚ್ಛ ನ್ಯಾಯಾಲಯದ ಈ ತೀರ್ಪು ಸುರಂಗ ಮಾರ್ಗದ ಕೊನೆಯಲ್ಲಿ ಕಾಣಿಸಿದ ಬೆಳಕಿನಂತಿದೆ ಎಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಬಣ್ಣಿಸಿದ್ದಾರೆ.
ಕೇಂದ್ರ ಸರಕಾರ ರಾಜಕೀಯ ಕಾರಣ ನೀಡಿ ಹೆಚ್ಚು ತಡ ಮಾಡದೆ ಕಾವೇರಿ ನದಿ ನೀರು ನಿರ್ವಹಣ ಮಂಡಳಿ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು ಕೂಡಲೇ ರಚಿಸಬೇಕು ಎಂದು ಕರುಣಾನಿಧಿ ಆಗ್ರಹಿಸಿದರು.
Next Story