ಚಿಕ್ಕಪ್ಪ ಶಿವಲಾಲ್ ರನ್ನು ಸಚಿವ ಸಂಪುಟದಿಂದ ಹೊರ ಹಾಕಿದ ಸಿಎಂ ಅಖಿಲೇಶ್
ಲಕ್ನೋ, ಅ.22: ಉತ್ತರ ಪ್ರದೇಶದಲ್ಲಿ ಯಾದವಿ ಕಲಹ ಮುಂದುವರಿದಿದ್ದು, ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಅವರು ರವಿವಾರ ತನ್ನ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಹಾಗೂ ಇನ್ನಿತರ ಮೂವರು ಸಚಿವರನ್ನು ಸಂಪುಟದಿಂದ ಹೊರದಬ್ಬಿದ್ದಾರೆ.
ಶಿವಪಾಲ್ ಯಾದವ್ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಕ್ಯಾಬಿನೆಟ್ ಸಚಿವರುಗಳಾದ ನಾರದ್ ರಾಯ್, ಓಂ ಪ್ರಕಾಶ್, ರಾಜ್ಯ ಸಚಿವೆ ಶಾದಾಬ್ ಫಾತಿಮಾ ಅವರನ್ನು ವಜಾಗೊಳಿಸಿ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಆದೇಶ ನೀಡಿದ್ದಾರೆ.
Next Story