ಮೋದಿಗೆ ಮುಸ್ಲಿಮರ ನೋವು ಅರ್ಥವಾಗುವುದಿಲ್ಲ: ಉರ್ದು ಕವಿ ರಾಣಾ
ವಾರಣಾಸಿ, ನ. 4: ಪ್ರಧಾನಿ ನರೇಂದ್ರಮೋದಿಗೆ ಮುಸ್ಲಿಮರ ನೋವನ್ನು ಆಲಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಸಿದ್ಧ ಉರ್ದು ಕವಿ ಮುನವ್ವರ್ ರಾಣಾ ಹೇಳಿದ್ದಾರೆ. ಮೋದಿಗೆ ದಲಿತರ ನೋವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅದಕ್ಕಿಂತಲೂ ದಯನೀಯ ಸ್ಥಿತಿಯಲ್ಲಿರುವ ಮುಸ್ಲಿಮರ ನೋವು ಅರ್ಥಮಾಡಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಮುನವ್ವರ್ ರಾಣಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ. ಆಲ್ ಇಂಡಿಯ ಮುಶಾವರ ಸಂಗಮದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಪಾಕಿಸ್ತಾನದೊಂದಿಗೆ ಸೌಹಾರ್ದದಿಂದಿರಲು ಸಾಧ್ಯವಾಗಬೇಕಾಗಿದೆ. ಪಾಕಿಸ್ತಾನದ ಕಲಾಕಾರರಿಗೆ ಭಾರತದಲ್ಲಿ ಸ್ವಾಗತದೊರಕಬೇಕು, ಸಾಂಸ್ಕೃತಿಕ ರಂಗದ ಕೊಡುಕೊಳ್ಳುವಿಕೆ ಅನಿವಾರ್ಯವಾಗಿದೆ ಎಂದು ರಾಣಾ ಹೇಳಿದ್ದಾರೆ.
ಸೇನೆಯನ್ನು ರಾಜಕೀಯಕ್ಕೆ ಬಳಸುವುದನ್ನು ಅವರು ವಿಮರ್ಶಿಸಿದ್ದಾರೆ. ಭೋಪಾಲ್ ಜೈಲಿಂದ ತಪ್ಪಿಸಿಕೊಂಡರೆನ್ನಲಾದ ಸಿಮಿಕಾರ್ಯಕರ್ತರನ್ನು ನಕಲಿ ಎನ್ಕೌಂಟರ್ ಮೂಲಕ ಕೊಲ್ಲಲಾಗಿದೆ. ಬಹಳ ವಿರಳ ಸಂದರ್ಭಗಳಲ್ಲಿ ಮಾತ್ರವೇ ನೈಜ ಎನ್ಕೌಂಟರ್ಗಳು ನಡೆಯುತ್ತವೆಂದು ಅವರು ನುಡಿದಿದ್ದಾರೆ.
ದೇಶದಲ್ಲಿರುವ ಅನ್ಯಾಯ ಅಸಹಿಷ್ಣುತೆಗಳ ವಿರುದ್ಧ ಪ್ರಶಸ್ತಿ ಮರಳಿಸುವ ಕಲಾವಿದರಪ್ರತಿಭಟನೆ ಮುಂದುವರಿಯಬೇಕೆಂದು ಮುನವ್ವರ್ ರಾಣಾ ಹೇಳಿದ್ದಾರೆಂದು ವರದಿ ತಿಳಿಸಿದೆ.