ಮಾವೊವಾದಿಗಳು ಕಮ್ಯುನಿಸ್ಟರಲ್ಲ: ಸಚಿವ ಎಂ.ಎಂ. ಮಣಿ
ತೊಡುಪುಝ, ನವೆಂಬರ್ 28: "ಮಾವೊವಾದಿಗಳು ಕಮ್ಯುನಿಸ್ಟರಲ್ಲ" ನಿಲಂಬೂರ್ನಲ್ಲಿ ಪೊಲೀಸರ ಎನ್ಕೌಂಟರ್ ಮೂಲಕ ಮಾವೊಯಿಸ್ಟ್ಗಳು ಹತರಾದ ಘಟನೆಯನ್ನು ಉಲ್ಲೇಖಿಸಿ ಕೇರಳ ವಿದ್ಯುತ್ ಸಚಿವ ಹೀಗೆ ಪ್ರತಿಕ್ರಿಯಿಸಿದ್ದಾರೆಂದು ವರದಿಯಾಗಿದೆ.
ಸಿಪಿಐಗೆ ಅವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯವಿದೆ. ಸಿಪಿಎಂ ನಿಲುವು ಪಾರ್ಟಿ ಕಾರ್ಯದರ್ಶಿ ತಿಳಿಸಿದ್ದಾರೆ. ತನಗೆ ಹೇಳಲು ತಿಳಿದಿದ್ದರೂ ತಾನು ಹೇಳಲಾರೆ ಎಂದು ಅವರು ಹೇಳಿದ್ದಾರೆ.
ಇಡುಕ್ಕಿ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರುಮಾತಾಡುತ್ತಿದ್ದರು. ವಿದ್ಯುತ್ ಮಂಡಳಿಯ ಕೆಲಸವನ್ನು ದಕ್ಷಗೊಳಿಸಲಾಗುವುದು. ಅರ್ಧದಲ್ಲಿ ನಿಂತ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಮುಂತಾದ ತನ್ನ ಯೋಜನೆಯನ್ನು ಮಂಡಿಸುವ ವೇಳೆ ಮಾವೋ ವಾದಿಗಳ ವಿರುದ್ಧ ನಡೆದ ಎನ್ಕೌಂಟರ್ ಕುರಿತು ಮೇಲಿನಂತೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆಂದು ವರದಿ ತಿಳಿಸಿದೆ.