ಕೋರ್ಟು ಆವರಣದಲ್ಲಿ ಸ್ಫೋಟ: ಇನ್ನೂ ಇಬ್ಬರ ಬಂಧನ
ಚೆನ್ನೈ,ನವೆಂಬರ್ 30: ಮಲಪ್ಪುರಂ, ಕೊಲ್ಲರ ಕಲಕ್ಟರೇಟ್ ಆವರಣದಲ್ಲಿ,ಕರ್ನಾಟಕ ಆಂಧ್ರ ರಾಜ್ಯಗಳ ಕೋರ್ಟು ಕಂಪೌಂಡ್ಗಳಲ್ಲಿ ನಡೆದಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಶಂಕಿತರನ್ನು ತಮಿಳ್ನಾಡಿನ ಮಧುರೆಯಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಮಧುರೆ ನೆಲ್ಪೋಟ್ಟ ತಯ್ಯೂರ್ ಸಂತೆಯ ಕಿಲಮರತ್ ವೀಥಿಯ ಶಂಸುದ್ದೀನ್(25), ಕಳೆದ ದಿವಸ ಸೆರೆಯಾದ ಖಾಸಗಿ ಕಂಪೆನಯ ಲೈಸನ್ಸ್ ಆಫೀಸರ್ ಆದ ಕಯ್ಪತ್ತೂರ್ ಎರಡನೆ ಬೀದಿಯ ಐಲಾಂಡ್ ನಗರದ ಮುಹಮ್ಮದ್ ಅಯ್ಯೂಬ್(25)ರನ್ನು ಎನ್ಐಎ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರನ್ನು ಮಧುರೆ, ಚೆನ್ನೈಗಳಿಂದ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ. ತಮಿಳ್ನಾಡು, ತೆಲಂಗಾಣ ಪೊಲೀಸರ ಭಯೋತ್ಪಾದನೆ ವಿರೋಧಿ ದಳದ ನೆರವಿನೊಂದಿಗೆ ಎನ್ಐಎ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ವರದಿ ತಿಳಿಸಿದೆ.
Next Story