‘ನನ್ನ ಭದ್ರತೆ ಹಿಂದೆಗೆದುಕೊಳ್ಳಿ ’ : ಚು.ಆಯೋಗಕ್ಕೆ ಕೇಜ್ರಿವಾಲ್
ಹೊಸದಿಲ್ಲಿ,ಜ.21: ಪಂಜಾಬ್ನಲ್ಲಿ ತನಗೆ ನೀಡಲಾಗಿರುವ ಭದ್ರತೆಯನ್ನು ಹಿಂದೆಗೆದು ಕೊಳ್ಳುವಂತೆ ಕೋರಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ.
ಪಂಜಾಬ್ ಪೊಲೀಸರನ್ನು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪಂಜಾಬ್ ಜನತೆಯ ವಿಶ್ವಾಸದ ಮರುಸ್ಥಾಪನೆಗಾಗಿ ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ.
Next Story