ಜಲ್ಲಿಕಟ್ಟು:36 ಜನರಿಗೆ ಗಾಯ
ಮದುರೈ,ಫೆ.5: ಮದುರೈ ಜಿಲ್ಲೆಯ ಅವನಿಪುರಂನಲ್ಲಿ ರವಿವಾರ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ 36 ಜನರು ಗಾಯಗೊಂಡಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಭಾರೀ ಬಿಗು ಭದ್ರತೆಯ ನಡುವೆ ನಡೆದ ಕ್ರೀಡೆಯಲ್ಲಿ 900ಕ್ಕೂ ಅಧಿಕ ಗೂಳಿಗಳನ್ನು ಬಿಡಲಾಗಿತ್ತು.
ಕ್ರೀಡೆಯನ್ನು ಏರ್ಪಡಿಸಲಾಗಿದ್ದ ಸ್ಥಳದ ಬಳಿಯೇ ವೈದ್ಯಕೀಯ ಶಿಬಿರದಲ್ಲಿ ಗಾಯಾಳು ಗಳಿಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವುಳ್ಳವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಗೂಳಿಗಳನ್ನು ಪಳಗಿಸುವ ಈ ಕ್ರೀಡೆಯಲ್ಲಿ 700ಕ್ಕೂ ಅಧಿಕ ಕ್ರೀಡಾಳುಗಳು ಭಾಗವಹಿಸಿದ್ದು, ನೋಡಲು ಸಾವಿರಾರು ಜನರು ಸೇರಿದ್ದರು.
ಜಲ್ಲಿಕಟ್ಟು ಆರಂಭಕ್ಕೆ ಮುನ್ನ ಗೂಳಿಗಳನ್ನು ಮತ್ತು ಕ್ರೀಡಾಳುಗಳನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು.
Next Story