Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಯಕ್ಷಗಾನದಲ್ಲಿ ಪಿಎಚ್‌ಡಿ ಮಾಡಿದ ಮೊದಲ...

ಯಕ್ಷಗಾನದಲ್ಲಿ ಪಿಎಚ್‌ಡಿ ಮಾಡಿದ ಮೊದಲ ಮಹಿಳೆ ಡಾ. ಮಾರ್ಥ

ಯಕ್ಷಗಾನ ಕುರಿತ 2ನೆ ಪುಸ್ತಕ ರಚನೆಯಲ್ಲಿ ವಿದೇಶಿ ಸಂಶೋಧಕಿ

ನಝೀರ್ ಪೊಲ್ಯನಝೀರ್ ಪೊಲ್ಯ23 May 2016 10:38 PM IST
share
ಯಕ್ಷಗಾನದಲ್ಲಿ ಪಿಎಚ್‌ಡಿ ಮಾಡಿದ ಮೊದಲ ಮಹಿಳೆ ಡಾ. ಮಾರ್ಥ

ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನವನ್ನು ನಾಲ್ಕು ದಶಕಗಳ ಹಿಂದೆಯೇ ಉಡುಪಿಯಲ್ಲಿ ಕಲಿತು ಅದೇ ವಿಷಯದಲ್ಲಿ ಪಿಎಚ್‌ಡಿ ಮಾಡಿದ ಮೊದಲ ಮಹಿಳೆ ಅಮೆರಿಕದ ಕ್ಯಾಲಿ ಪೋರ್ನಿಯಾ ನಿವಾಸಿ ಡಾ.ಮಾರ್ಥ ಆಸ್ಟನ್ ಸಿಕೋರ(81). ಯಕ್ಷಗಾನ ಕಲೆಯನ್ನು ಇನ್ನಷ್ಟು ಜನ ಅರಿತುಕೊಳ್ಳಬೇಕೆಂಬ ಇರಾದೆಯಲ್ಲಿ ಅವರು ಇದೀಗ ಆ ಕುರಿತು ಎರಡನೆ ಪುಸ್ತಕ ರಚನೆಯ ತಯಾರಿಯಲ್ಲಿದ್ದಾರೆ. ಅಮೆರಿಕದ ಬರ್ಕ್‌ಲಿಯ ವಿಶ್ವವಿದ್ಯಾನಿಲಯದಲ್ಲಿ ಜಾನಪದ ಪ್ರಾಧ್ಯಾಪಕಿಯಾಗಿದ್ದ ಮಾರ್ಥ, ಜಾನಪದ ವಿದ್ವಾಂಸ ಬಾಲ್ವಾಂಟ್ ಗಾರ್ಗಿ ಎಂಬವರು ಬರೆದ ಭಾರತದ ಜಾನಪದ ಕಲೆಗಳು ಎಂಬ ಪುಸ್ತಕವನ್ನು ಓದಿ ಯಕ್ಷಗಾನ ಕಲೆಯನ್ನು ಮೊತ್ತಮೊದಲ ಬಾರಿಗೆ ಅರಿತುಕೊಂಡರು. ನಂತರ ಅದರ ಬಗ್ಗೆ ಆಸಕ್ತಿ ಹೊಂದಿ ಶಿಷ್ಯವೇತನದೊಂದಿಗೆ 1969ರಲ್ಲಿ ಉಡುಪಿಗೆ ಬಂದರು. ಆಗ ಇವರಿಗೆ 31 ವರ್ಷ ವಯಸ್ಸು. ಉಡುಪಿ ಎಂಜಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕಿಯಾಗಿದ್ದ ಲೀಲಾ ಭಟ್‌ರ ಮನೆಗೆ ಬಂದ ಇವರು ನಂತರ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್‌ರಿಂದ ಯಕ್ಷಗಾನ ಕಲಿತರು. 6-7ವರ್ಷಗಳಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ ಅವರು, ಮೊತ್ತ ಮೊದಲ ಪ್ರದರ್ಶನವನ್ನು ನೀಡಿದ್ದು 1971ರಲ್ಲಿ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದಲ್ಲಿ. ಈ ಕಾರ್ಯಕ್ರಮದಲ್ಲಿ ಅವರು ಪೀಠಿಕಾ ಸ್ತ್ರೀ ವೇಷ ಮಾಡಿದರು.

ಅದೇ ರೀತಿ ಬ್ರಹ್ಮಾವರದಲ್ಲಿಯೂ ಪ್ರದರ್ಶನ ನೀಡಿದ್ದ ಇವರನ್ನು ಸನ್ಮಾನಿಸಲಾಗಿತ್ತು. ನಂತರ ಕೆರೆಮನೆ ಕುಟುಂಬದಿಂದಲೂ ಯಕ್ಷಗಾನದ ಬಗ್ಗೆ ಅಧ್ಯಯನ ನಡೆಸಿದ್ದರು. ಹೀಗೆ ಬಡಾಬಡಗು, ತೆಂಕು ಯಕ್ಷಗಾನವನ್ನು ತಿಳಿದು ಕೊಂಡ ಮಾರ್ಥ, 1972ರಲ್ಲಿ ಲ್ಯಾನ್ಸಿಂಗ್ ಮಿಚಿಗನ್ ಸ್ಟೇಟ್‌ನ ವಿವಿಯಿಂದ ಏಷ್ಯನ್ ಥಿಯೇಟರ್ ವಿಷಯವಾಗಿ ಯಕ್ಷಗಾನದಲ್ಲಿ ಪಿಎಚ್‌ಡಿ ಪಡೆದುಕೊಂಡರು. 1977ರಲ್ಲಿ ಇವರು ತಮ್ಮ ಗುರು ಗೋಪಾಲರಾಯರನ್ನು ಅಮೆರಿಕಕ್ಕೆ ಕರೆದುಕೊಂಡು ಹೋದರು. ಮುಂದೆ 1978ರಲ್ಲಿ ಮಾರ್ಥ ಉಡುಪಿಯ ಯಕ್ಷಗಾನ ಮೇಳವನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಮೂರು ತಿಂಗಳ ಕಾಲ ವಿವಿ ಸೇರಿದಂತೆ ಹಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವಂತೆ ಮಾಡಿದರು. ಹೀಗೆ ಯಕ್ಷಗಾನ ಕಲೆಯ ಕಂಪನ್ನು ಅಮೆರಿಕದಲ್ಲೂ ಬೆಳಗಿಸಿದ ಕೀರ್ತಿಗೆ ಅವರು ಪಾತ್ರರಾದರು. ಯಕ್ಷಗಾನವನ್ನು ಆಳವಾಗಿ ಅಧ್ಯಯನ ಮಾಡಿದ್ದ ಡಾ.ಮಾರ್ಥ 1977ರಲ್ಲಿ ‘ಯಕ್ಷಗಾನ: ಎ ಡ್ಯಾನ್ಸ್ ಡ್ರಾಮಾ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಬರೆದರು.

ಎಂಜಿಎಂನ ಪ್ರಾಧ್ಯಾಪಕರಾದ ಲೀಲಾ ಭಟ್ ಹಾಗೂ ಲಕ್ಷ್ಮೀ ಕುಟ್ಟಿಯವರಿಂದ ಕನ್ನಡವನ್ನು ಕಲಿತ ಡಾ.ಮಾರ್ಥ ಈಗ ನಿರರ್ಗಳವಾಗಿ ಶುದ್ಧ ಕನ್ನಡ ಮಾತನಾಡುತ್ತಾರೆ. ಇದರೊಂದಿಗೆ ಹಿಂದಿ, ಫ್ರೆಂಚ್ ಭಾಷೆಯನ್ನು ಕೂಡ ಇವರು ಕಲಿತಿದ್ದರು. ಅಮೆರಿಕದಲ್ಲಿ ನೃತ್ಯ ಕಲಿಕೆ ಮಾಡುತ್ತಿದ್ದಾಗ ಮಾರ್ಥರಿಗೆ ಜೀವ ವಿಜ್ಞಾನಿ ಹಾಗೂ ಹವ್ಯಾಸಿ ಛಾಯಾಗ್ರಾಹಕರಾಗಿದ್ದ ಬಾಬ್ ಸಿಕೋರಾ ಅವರ ಪರಿಚಯವಾಯಿತು. ಅವರನ್ನು 1987ರಲ್ಲಿ ಹಿರಿಯಡ್ಕದ ಓಂತಿಬೆಟ್ಟುವಿನಲ್ಲಿರುವ ತಮ್ಮ ಗುರು ಗೋಪಾಲ ರಾಯರ ಮನೆಯಲ್ಲಿ ಭಾರತೀಯ ಸಂಪ್ರದಾಯದಂತೆ ವಿವಾಹವಾದರು. ಇದೀಗ ಡಾ.ಮಾರ್ಥ ಈ ಇಳಿ ವಯಸ್ಸಿನಲ್ಲೂ ಯಕ್ಷಗಾನದ ಬಗ್ಗೆ ಅಧ್ಯಯನ ಪುಸ್ತಕ ರಚಿಸಲು ಮುಂದಾಗಿದ್ದಾರೆ. ಯಕ್ಷಗಾನ ಈ ಹಿಂದೆ ಹೇಗೆ ಇತ್ತು, ಈಗ ಹೇಗೆ ಇದೆ, ಮುಂದೆ ಹೇಗೆ ಇರಬೇಕು ಎಂಬುದರ ಬಗ್ಗೆ ಅವರು ಪುಸ್ತಕ ಬರೆಯುವ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಮತ್ತೆ ಭಾರತಕ್ಕೆ ಬಂದಿರುವ ಅವರು ಯಕ್ಷಗಾನವನ್ನು ಇನ್ನಷ್ಟು ಅಧ್ಯಯನ ಮಾಡುತ್ತಿದ್ದಾರೆ. ‘‘ಯಕ್ಷಗಾನ ಕಲೆ ಇನ್ನಷ್ಟು ಜನರಿಗೆ ತಿಳಿಯಬೇಕು. ಅಮೆರಿಕದಲ್ಲಿ ಇದಕ್ಕೆ ಸಾಕಷ್ಟು ಪ್ರಚಾರ ಸಿಗಬೇಕೆಂಬ ಉದ್ದೇಶದಿಂದ ಪುಸ್ತಕ ಬರೆಯುವ ಸಂಕಲ್ಪ ಮಾಡಿದ್ದೇನೆ’’ ಎನ್ನುತ್ತಾರೆ ಡಾ.ಮಾರ್ಥ.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X