ಚಿರಾಗ್ ಪಾಸ್ವಾನ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿಗೆ ವಿರೋಧ: ಕೇಂದ್ರ ಸಚಿವ ಪಶುಪತಿ ಪರಾಸ್ ರಾಜೀನಾಮೆ
ಪಶುಪತಿ ಪರಾಸ್ | Photo: PTI
ಹೊಸದಿಲ್ಲಿ: ಮಂಗಳವಾರ RLJP ಅಧ್ಯಕ್ಷ ಪಶುಪತಿ ಕುಮಾರ್ ಪಾರಸ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
“ನಮ್ಮ ಪಕ್ಷವು ಐದು ಮಂದಿ ಸಂಸದರನ್ನು ಹೊಂದಿದ್ದು, ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಹೀಗಿದ್ದೂ ನಮಗೆ ಅನ್ಯಾಯವೆಸಗಲಾಗಿದೆ. ಹೀಗಾಗಿ, ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಬಿಜೆಪಿಯು ತಮ್ಮ ಎಲ್ಜೆಪಿ ಬಣಕ್ಕೆ ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದ ಅವರು, ತಾನು ಎನ್ಡಿಎ ಮೈತ್ರಿಕೂಟದಿಂದ ಹೊರ ನಡೆಯುವ ಸೂಚನೆಯನ್ನು ನೀಡಿದ್ದರು. ನಾವೀಗ ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರವಾಗಿದ್ದು, ಬಾಗಿಲುಗಳು ತೆರೆದಿವೆ ಎಂದು ಹೇಳಿದ್ದರು.
ಬಿಜೆಪಿಯು ತಮ್ಮ ಸಹೋದರನ ಪುತ್ರನ ನೇತೃತ್ವದ ಲೋಕ್ ಜನಶಕ್ತಿ ಪಕ್ಷದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿರುವುದರಿಂದ ಪಶುಪತಿ ಕುಮಾರ್ ಪಾರಸ್ ಅಸಮಾಧಾನಗೊಂಡಿದ್ದಾರೆ.
Next Story