ಕಿರುಕುಳ: ದೂರು ದಾಖಲು
ಭಟ್ಕಳ: ಇಲ್ಲಿನ ವಸತಿಗೃಹವೊಂದರ ಕೊಳಚೆ ನೀರು ಮನೆಗೆ ನುಗ್ಗಿ ಇಲ್ಲಿನ ಪರಿಸರ ಹಾಳಗುತ್ತಿದೆ ಎಂದು ಮಹಿಳೆಯೊರ್ವರು ದೂರು ನೀಡಿದ್ದು, ವಿಚಾರಣೆಗೆಂದು ಪಿಡಿಒ ಜೊತೆ ತೆರಳಿದಾಗ ಮಗಳೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂದು ಮಹಿಳೆಯೊರ್ವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಮುರ್ಡೇಶ್ವರದ ವಸತಿ ಗೃಹವೊಂದು ಬಳಸಿದ ನೀರು ತನ್ನ ಕಂಪೌಂಡಿನಲ್ಲಿ ಬಂದಿದ್ದು ಇಲ್ಲಿನ ಪರಿಸರ ಕುಲುಷಿತವಾಗುತ್ತಿದೆ ಎಂದು ಹೆಲನ್ ಗೋಮ್ಸ್ ಜಿಲ್ಲಾಧಿಕಾರಿ ವ್ಯಾಟ್ಸಪ್ಗೆ ದೂರು ನೀಡಿದ್ದರು. ಪರೀಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಸೂಚನೆ ಬಂದ ಹಿನ್ನಲೆಯಲ್ಲಿ ಪಿಡಿಒ ಎಲ್ಲವೂ ಸರಿ ಇದೆ ಎಂದು ವರದಿ ನೀಡಿದ್ದರು. ಇದನ್ನು ತಿಳಿದ ಮಹಿಳೆ ಪಿಡಿಒ ಒಂದಿಗೆ ಸ್ಥಳಕ್ಕೆ ತೆರಳಿದಾಗ ವಸತಿಗೃಹದ ಸಿಬ್ಬಂದಿ ಮಹಿಳೆಯನ್ನು ಒಳಗೆ ಬರದಂತೆ ತಡೆದು ತನ್ನ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪಾವುಲ್ ದಿಕೋಸ್ತಾ, ಪ್ರಾನ್ಸಿಸ್ ಡಿಕೋಸ್ತಾ, ಪಿಡಿಒ ನಟರಾಜ, ರಾಜೀವ, ರಾಮ ಹಾಗೂ ಮತ್ತಿಬ್ಬರ ವಿರುದ್ದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.